Posts

ಹೇಳಿ ಹೋಗು ಕಾರಣ By (ರವಿ ಬೆಳಗೆರೆ)

Image
  ಪುಸ್ತಕ ವಿಮರ್ಶೆ ಹೀಗೆಯೇ ಇರಬೇಕು‌ ಎಂಬ ನಿಯಮವಿದೆಯೇ? ಗೊತ್ತಿಲ್ಲ. ಆದರೆ ಒಂದು 'ಪುಸ್ತಕ' ಹೀಗೆಯೇ ಇರಬೇಕು ಎಂಬ ನಿಯಮ ಇರಲಿಕ್ಕಿಲ್ಲ. ಇಲ್ಲದಿದ್ದರೆ ಹಿಂದೆಂದೂ ಓದಿರದ 'ಹೊಸ ರೀತಿಯ' ಈ ಪುಸ್ತಕ ಇರುತ್ತಲೇ ಇರಲಿಲ್ಲ. ಬೆನ್ನುಡಿ ಓದಿದರೆ ಇದು ಪ್ರೀತಿಸಿ ಮೋಸ ಮಾಡುವ (?) ಹುಡುಗಿಯ ಕಥೆ ಇರಬಹುದು ಎಂದೆನಿಸುತ್ತದೆ. ಮದುವೆಯಾಗಿ ಮಕ್ಕಳಿರುವ ನಾನು ಸಹ 'ಇದನ್ನು ಓದಿ ನಾನು ಮಾಡುವಂಥದ್ದೇನಿಲ್ಲ' ಅಂತಲೇ ಕಾಲ ಕಳೆಯುತ್ತಿದ್ದೆ. ಆದರೆ ಒಮ್ಮೆ ಅಕಸ್ಮಾತ್ತಾಗಿ ಈ ಪುಸ್ತಕ ಹಿಡಿದೆ. ಕಂಡಿದ್ದು ಬೇರೆಯದೇ ಪ್ರಪಂಚ!!! ಪುಸ್ತಕದಲ್ಲಿನ ಪ್ರತೀ ಬರಹದಲ್ಲಿಯೂ, ಪ್ರತೀ ಸಾಲಿನಲ್ಲಿಯೂ ಯಾವುದೋ ಒಂದು ಜೀವನಾನುಭವವಿದೆ. ಆ ಘಟನೆಗಳು ನಮಗೆ ಏನೋ ಸೂಚ್ಯವಾಗಿ ಹೇಳುತ್ತವೆ... ಒಬ್ಬನೇ ಮನುಷ್ಯನಿಗೆ ಇಷ್ಟೊಂದು ಪ್ರಪಂಚ ಜ್ಞಾನ ಇರಲು ಸಾಧ್ಯವಾ ಅಂತ ಗಾಬರಿಯಾಗುವಷ್ಟು ಪಾತ್ರ ಪ್ರಪಂಚ ದೊಡ್ಡದಿದೆ. ತನಗೆ ಗೊತ್ತಿರುವುದನ್ನು, ಹೇಳಿದ್ದನ್ನು, ಕೇಳಿದ್ದನ್ನು ಸಂದರ್ಭಕ್ಕೆ ತಕ್ಕಂತೆ ತನ್ನ ಬರಹದೊಳಗೆ ಇಳಿಸುವ ಚಾಕಚಕ್ಯತೆ ಲೇಖಕನಿಗೆ ಬೇಕಿರುತ್ತದೆ. ಅದು ಇವರಿಗೆ ಸಹಜವಾಗಿಯೇ ಸಿದ್ಧಿಸಿದೆ. ಬರಹದ ಶೈಲಿ ಅಂತೂ... ಓದಿಯೇ ಸವಿಯಬೇಕು. ಮೊದಲ ಬಾರಿ ಇದನ್ನು ಓದುತ್ತಿದ್ದಾಗ, ಬಹುಶಃ ಲೇಖಕರು ತಮಗೆ ಕಂಡ ಪ್ರತಿಯೊಂದನ್ನೂ ಈ ಕಥೆಯೊಳಗೆ ತಂದಿದ್ದಾರೆ ಅಂತಲೇ ಅಂದುಕೊಂಡಿದ್ದೆ. ಆದರೆ ಪುಸ್ತಕ ಮುಗಿದಾಗ ಗೊತ್ತಾಯ್ತು.... ಇಲ್ಲಿನ‌ ಪ್ರ...

"ನನ್ನಿ" By ಕರಣಂ ಪವನ್ ಪ್ರಸಾದ್

Image
  ಲೇಖಕರು: ಕರಣಂ ಪವನ ಪ್ರಸಾದ್   'ನನ್ನಿ' ಎಂದರೆ ಸತ್ಯ. ಮುಖಪುಟದಲ್ಲಿ ನನ್ ಒಬ್ಬಳ ಫೋಟೋ ಇರುವುದರಿಂದ ಇದು ನನ್ ಒಬ್ಬಳ ಕಥೆ, ಅದಕ್ಕಾಗಿ ನನ್ನಿ ಎಂದಿಟ್ಟಿದ್ದಾರೆ ಎಂದುಕೊಂಡಿದ್ದೆ. ಆದರೆ ನನ್ನಿ ಎಂಬುದು ಕನ್ನಡ ಪದ ಅಂತ ಕನ್ನಡಿಗಳಾಗಿರುವ ನನಗೆ ಕಾದಂಬರಿ ಮುಗಿಸಿದ ಮೇಲೆ ಕಡೆಯ ಪುಟದ ಲೇಖಕರ ಹಿನ್ನುಡಿ ನೋಡಿ ಅರ್ಥವಾಯ್ತು. ನಮಗೆ ಪರಿಚಿತತೆಗಿಂತಲೂ ಅಪರಿಚಿತತೆ ಕಡೆಯೇ ಒಲವು ಜಾಸ್ತಿ. ಏಕೆಂದರೆ ಅವರ ಬಗ್ಗೆ ಹೆಚ್ಚು ತಿಳಿದಿರುವುದಿಲ್ಲವಲ್ಲ. ಇಲ್ಲಿಯೂ ಬಾಲಕಿಯಾದ ದುರ್ಗಾ ತನಗೆ ಎದುರಾಗುವ ಲೈಂಗಿಕ ಕಿರುಕುಳದಿಂದ ತಪ್ಪಿಸಿಕೊಳ್ಳಲು‌ ಬೇರೆ ದಾರಿಯಿಲ್ಲದೇ 'ನನ್' (ಸಿಸ್ಟರ್ ರೋಣ) ಆಗುತ್ತಾಳೆ. ಅದಾದ ನಂತರವೇ ಅವಳಿಗೆ ಅಲ್ಲಿನ ಕರಾಳ ಮುಖ ತೆರೆದುಕೊಳ್ಳುತ್ತಾ ಹೋಗುತ್ತದೆ. ಕರಾಳವೆಂದರೆ..... ಇವಳ ಜೊತೆ ಯಾರೂ ಕೆಟ್ಟದಾಗಿ ನಡೆದುಕೊಳ್ಳುವುದಿಲ್ಲ ಅಥವಾ ಇವಳ ಮೇಲೆ ದೈಹಿಕವಾಗಿ ಆಗಲೀ ಮಾನಸಿಕವಾಗಿಯಾಗಲೀ ದೌರ್ಜನ್ಯ ನಡೆಸುವುದಿಲ್ಲ. ಆದರೆ ಸೇವೆಯ ನೆಪದಲ್ಲಿ ಬಡಜನರ ಮೇಲೆ ನಡೆಯುತ್ತಿರುವ ದೌರ್ಜನ್ಯ ಕಂಡು ಆಕೆ ಕೊರಗುತ್ತಾಳೆ. ಏಕೆಂದರೆ ಅವರ ಸಿ.ಎಂ.ಸಿ (Charity Mission for culcutta) ಸಂಸ್ಥೆಯಲ್ಲಿರುವ ಅನಾಥರು, ವಯೋವೃದ್ಧರು ಖಾಯಿಲೆಯಿಂದಲೋ ಹಸಿವೆಯಿಂದಲೋ ನೋವು ಅನುಭವಿಸುತ್ತಿರುವುದನ್ನು ಕಂಡು 'ಅವರು ಪಾಪ ಅನುಭವಿಸುತ್ತಿದ್ದಾರೆ' ಎಂದು ಅವರಿಗೆ ಚಿಕಿತ್ಸೆ ಕೊಡದೇ ಸಾಯಲು ಬಿಡುವುದು, ಊಟ ಹಾಕುತ್ತೇವೆ ...

"ಕರ್ಮ" By ಕರಣಂ ಪವನ್ ಪ್ರಸಾದ್

Image
ಲೇಖಕರು: ಕರಣಂ ಪವನ ಪ್ರಸಾದ್ ಯಾವ ಕರ್ಮ? ಅದು ಅಪರ ಕರ್ಮ. ಆಡುಭಾಷೆಯಲ್ಲಿ ತಿಥಿ ಎನ್ನಲಾಗುತ್ತದೆ. ಆದರೆ ವೈದಿಕರು ಆ ಪದವನ್ನು ಬಳಸದೇ ಕರ್ಮ ಅಥವಾ ಕಾರ್ಯ ಎಂದೇ ಹೇಳುತ್ತಾರೆ. ಹಾಗಾಗಿ "ಕರ್ಮ" ಎಂದರೆ ಕ್ರಿಯೆಯಲ್ಲ... ಆ ಕ್ರಿಯೆಯ ಕಾರ್ಯ.  ಕಾಲ ಬದಲಾಗುತ್ತಿದ್ದಂತೆ ಮನುಷ್ಯ ತಾನೂ ಸಹ ಕಾಲದೊಂದಿಗೆ ಬದಲಾಗುತ್ತಾ ಬರುತ್ತಾನೆ. ಅವನ ಸೌಕರ್ಯ ಹೆಚ್ಚಿದಂತೆಲ್ಲಾ ಆತ ಸೋಮಾರಿಯಾಗುತ್ತಾನೆ. ಅತೀ ಅವಶ್ಯಕತೆ ಇರದ ಹೊರತೂ ಕಷ್ಟದ ಕಾರ್ಯಗಳಲ್ಲಿ ಆತ ತೊಡಗಲಾರ. ಇದೂ ಹಾಗೆಯೇ.... ಬೆಂಗಳೂರಿನ ಐಟಿ-ಬಿಟಿ ಸಂಸ್ಕೃತಿಗೆ ಒಗ್ಗಿ ಹೋಗಿರುವ ಕಥಾನಾಯಕನಿಗೆ ಹದಿಮೂರು ದಿನಗಳ ಶ್ರಾದ್ಧ ಮಾಡು ಅಂದರೆ ಹೇಗೆ ಸಾಧ್ಯ? ಶ್ರದ್ಧೆಯಿಂದ ಮಾಡುವುದೇ ಶ್ರಾದ್ಧ. ಆದರೆ ಶ್ರದ್ಧೆಯೆಲ್ಲಿದೆ? ತಾಳ್ಮೆಯಲ್ಲಿದೆ.. ತಾಳ್ಮೆ ಎಲ್ಲಿದೆ? ಅದು ಸತ್ತು ಹೋಗಿದೆ... ಟ್ರಾಫಿಕ್ಕಿನಲ್ಲಿ ನೂರಿಪ್ಪತ್ತು ಸೆಕೆಂಡಿನಷ್ಟು ಕಾಯಲಾಗದ ಆತುರಗಾರರು ನಾವು.. ಇನ್ನು ಕಂಡು ಕೇಳರಿಯದ ಭಾಷೆಯ ಮಂತ್ರೋಚ್ಛಾರಣೆಯ ಶ್ರಾದ್ಧದ ಕಾರ್ಯ ಮಾಡಲು ತಾಳ್ಮೆ ಇರುವುದೇ?  ಅದಕ್ಕಾಗಿಯೇ ಕಥಾನಾಯಕ ನಮಗಿಷ್ಟವಾಗುತ್ತಾನೆ.  ನಾವೂ ಅವನಂತೆ ಯೋಚಿಸುತ್ತೇವಲ್ಲ... ಹಾಗಾಗಿ ಕಥೆ ಓದುವಾಗ ಅವನ ದೃಷ್ಟಿಕೋನ ಸರಿ ಅಂತಲೇ ಅನ್ನಿಸುತ್ತದೆ. ಅಲ್ಲದೇ ಆತನ ಹೆಂಡತಿ... ಅವಳು ಸಹ ಮಾಡರ್ನ್ ಗರ್ಲ್.. ಬೆಂಗಳೂರಿನ ಬಹುತೇಕರು ಜಾತಿ-ಸಂಪ್ರದಾಯವಿಲ್ಲದೇ ಒಂದು ಮೆಟ್ರೋಪಾಲಿಟನ್ ಸಂಸ್ಕೃತಿ ಬಾಳುತ್ತಿದ್ದಾರೆ. ಹಾಗ...

ಘಾಚರ್ ಘೋಚರ್ by ವಿವೇಕ್ ಶಾನಭಾಗ್

Image
ಲೇಖಕರು: ವಿವೇಕ್ ಶಾನಭಾಗ ಹಾಗೆಂದರೇನು? ಘಾಚರ್ ಘೋಚರ್ ಎಂದರೆ? ಉಹುಂ... ಅದನ್ನು ತಿಳಿಯಬೇಕೆಂದರೆ ಪೂರ್ತಿ ಕಥೆ ಓದಬೇಕು. ಓದಿದ ನಂತರ ನಾವೂ ಸಹ ಕೆಲವು ಸಂದರ್ಭಗಳಲ್ಲಿ 'ಘಾಚರ್-ಘೋಚರ್' ಅಂತ ಬಳಸಲು ಶುರುಮಾಡಿಬಿಡುವ ಚಾನ್ಸಿದೆ. ಆದರೆ ನಾನು ಇದುವರೆಗೂ ಈ ಪುಸ್ತಕ ಓದಿಲ್ಲದೇ ಇದ್ದುದಕ್ಕೆ ಕಾರಣವೇ ಇದರ 'ಶೀರ್ಷಿಕೆ'. ಆದರೆ ಓದಿದ ನಂತರ, ಈಗ ವಿವೇಕ ಶಾನುಭಾಗ ಅವರ ಬರಹಕ್ಕೆ ಸಂಪೂರ್ಣ ಮನಸೋತಿದ್ದೇನೆ. ಆ ರೀತಿ ಬರಹಕ್ಕೆ ಮನಸೋಲುವಂತೆ ಮಾಡುವ ಅಂಶಗಳಿವೆ ಇದರಲ್ಲಿ. ಭೂಮಿಯ ಮೇಲೆ ಆರುನೂರಾ ಮೂವತ್ತು ಕೋಟಿ ಜನರಿದ್ದೇವೆ. ಒಬ್ಬೊಬ್ಬರದು ಒಂದೊಂದು ಮನಸ್ಥಿತಿ. ನಮಗೆ ಎಲ್ಲರ ಮನಸ್ಸಿನೊಳಗೆ ಹೊಕ್ಕು ಅವರ ಮನಸ್ಸುಗಳನ್ನು ತಿಳಿಯಲು ಬರುವುದಿಲ್ಲ ಅಲ್ವೇ? ಅದಕ್ಕೆ ಹಿರಿಯರು "ದೇಶ ಸುತ್ತಿ ನೋಡು: ಕೋಶ ಓದಿ ನೋಡು" ಅಂತ ಗಾದೆ ಮಾಡಿರುವುದು. ಈ ಪುಸ್ತಕ ಓದಿದರೆ 'ಕೋಶ' ಓದಿದಂತೆಯೇ, ನಮಗೆ ಒಮ್ಮೆಲೇ ಹಲವು ವ್ಯಕ್ತಿತ್ವಗಳ ಪರಿಚಯವಾಗುತ್ತದೆ. ಅಷ್ಟಾಗಿ ಜನರನ್ನು ಸೇರದ ನನ್ನಂಥವಳಿಗೂ ಸಹ, ನಮ್ಮೆದುರಿನ ಜನರ ಮನಸ್ಸಿನೊಳಗೆ ಏನು ನಡೆಯುತ್ತಿರಬಹುದು ಎಂಬ ಊಹೆ ಮಾಡುವ ಶಕ್ತಿ ನೀಡುತ್ತದೆ ಈ ಪುಸ್ತಕ. ನಮ್ಮ ಜೀವನದಲ್ಲಿ ನಮಗೆ ಎಲ್ಲಾ ಅನುಭವಗಳೂ ಆಗಲೇಬೇಕು ಅಂತಿಲ್ಲ. ಯಾರೋ ಅಪರಿಚಿತ ಹೆಂಗಸು ದಿಢೀರನೆ ಮನೆಯೊಳಗೆ ನುಗ್ಗಿ ಮನೆ ಯಜಮಾನನೊಡನೆ ತನಗೆ ಆಪ್ತತೆಯಿದೆ ಅಂತ ಪ್ರಕಟಿಸಿದರೆ ಆ ಮನೆಯವರು ಹೇಗೆ ಪ್ರತಿಕ್ರಿಯಿಸಬಹ...

ಬೆಕ್ಕಿನ ಕಣ್ಣು by ತ್ರಿವೇಣಿ

Image
  ಒಬ್ಬ ಹೆಣ್ಣಿನ ಅಸಹಾಯಕತೆ, ಹತಾಶೆಯನ್ನು ತ್ರಿವೇಣಿಯವರಂತೆ ಮತ್ಯಾರಿಗೂ ವರ್ಣಿಸಲು ಸಾಧ್ಯವಿಲ್ಲವೇನೋ? ಅವಳ ಆ ಅದುಮಿಟ್ಟ ಹತಾಶೆಯೇ ಕ್ರೌರ್ಯವಾಗಿ ಹೊರಹೊಮ್ಮುವುದು ಅಂತ ಯಾರಿಗೂ ಅರ್ಥವಾಗೋಲ್ಲ. ಅವಳು ತನ್ನ ಆಕ್ರೋಶ ತೋರಿಸಿದರೆ ಜನ "ಅವಳಿಗೆ ದೆವ್ವ ಮೆಟ್ಟಿದೆ" ಅಂತಷ್ಟೇ ತಿಳಿಯುತ್ತಾರೆ. ಆಗ ದೆವ್ವ ಬಿಡಿಸುವವರನ್ನು ಕರೆದುಕೊಂಡು ಬಂದು ಆ ಹೆಣ್ಣಿಗೆ ಚಿತ್ರಹಿಂಸೆ ನೀಡುತ್ತಾರೆ. ಆದರೆ ತ್ರಿವೇಣಿ ಅವರು ಮಾತ್ರವೇ ಅವಳ ಈ ಮನಸ್ಥಿತಿಯ ಹಿಂದಿನ ಸಂದರ್ಭಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ನಮ್ಮ ಮುಂದೆ ಇಡುತ್ತಾರೆ. ಕಥೆ ಹೀಗಿದೆ. ತನ್ನ ತಾಯಿಯ ಅಕ್ಕರೆಯಲ್ಲಿ ಮಿಂದು ಬೆಳೆಯುತ್ತಿದ್ದ ಒಬ್ಬ ಸ್ವತಂತ್ರ ಮನೋಭಾವದ ಹೆಣ್ಣುಮಗಳು ಕುಸುಮ, ಬುದ್ಧಿಯೇ ಇರದ ಚಿಕ್ಕ ವಯಸ್ಸಿನಲ್ಲಿ ತನಗೆ ಪ್ರಾಣಕ್ಕಿಂತ ಹೆಚ್ಚು ಪ್ರಿಯಳಾಗಿದ್ದ ತಾಯಿಯನ್ನು ಕಳೆದುಕೊಳ್ಳುತ್ತಾಳೆ. ಈಗ ತನ್ನ ತಾಯಿ ಇಲ್ಲ ಅಂತಷ್ಟೇ ಗೊತ್ತಿರುತ್ತದೆ ಹೊರತೂ ಯಾಕಿಲ್ಲ ಅಂತಲೂ ಅರ್ಥವಾಗದ ವಯಸ್ಸು ಅವಳದ್ದು. ಆಗವಳ ತಂದೆ ಮತ್ತೊಮ್ಮೆ ಮದುವೆ ಆಗ್ತಾರೆ. ಅವರಿಗೆ ಮದುವೆ ಆಗಬೇಡಿ ಅಂತ ಹೇಳಲು ನಾವ್ಯಾರು? ಹೆಂಡತಿಯಿಲ್ಲದ ರಾಯರು ಮನೆಕೆಲಸದ ಜೊತೆ ಮಗಳ ಪಾಲನೆಯಲ್ಲಿ ಸೋತು ಬಿಟ್ಟಿರುತ್ತಾರೆ. ಹೆಣ್ಣಿಲ್ಲದ ಮನೆಯೂ ಒಂದು ಮನೆಯೇ? ಅದಕ್ಕಾಗಿ ಅವರು ಮತ್ತೊಂದು ಹೆಣ್ಣನ್ನು ಮದುವೆ ಆಗುತ್ತಾರೆ. ಈ ವಿಷಯದಲ್ಲಿ ಅವರನ್ನು ಕ್ಷಮಿಸೋಣ... ಆದರೆ ಬಲತಾಯಿಯಾಗಿ ಬಂದ ಪದ್ಮ ಪಾಪದ ಮಗುವಾದ ಕುಸು...

ಅವಳ ಮನೆ by ತ್ರಿವೇಣಿ

Image
  ಹೆಣ್ಣುಮಕ್ಕಳಿಗೆ ಇದೊಂದು ಪ್ರಶ್ನೆ ಸದಾ ಕಾಡುತ್ತದೆ. "ನನ್ನ ಮನೆ ಯಾವುದು?" ಎನ್ನುವುದು. ಏಕೆಂದರೆ ಹುಟ್ಟಿದಾಗಿನಿಂದಲೇ ಆಕೆಯ ತಲೆಗೆ 'ಅವಳು ಬೇರೆ ಮನೆಗೆ ಸೇರುವವಳು' ಅಂತಲೇ ತಲೆಗೆ ತುಂಬಿ ಬೆಳೆಸಲಾಗುತ್ತಿರುತ್ತದೆ. ಹಾಗಾಗಿ ಪ್ರತೀ ಹೆಣ್ಣಿಗೆ ಎರಡು ಮನೆಗಳಿರುತ್ತವೆ; ಹುಟ್ಟಿದ ಮನೆ ಮತ್ತು ಮೆಟ್ಟಿದ ಮನೆ ಎಂದುಕೊಳ್ಳಬಹುದು. ಆದರೆ ಕಥಾನಾಯಕಿ ಸರೋಜಿಗೆ ಬಂಪರ್ ಎಂಬಂತೆ ಮತ್ತೊಂದು ಮನೆ ಸಿಗುತ್ತದೆ. ಆದರೆ ಈ ಮನೆಗಳು ಅವಳ ಮನಸ್ಸು ತುಂಬುವುದಿಲ್ಲ. ಹುಟ್ಟಿದ ಮನೆಯಲ್ಲಿ ಬಡತನದ ಕಾರಣದಿಂದ ಅವಳನ್ನು ಒಂದು ಶ್ರೀಮಂತ ಕುಟುಂಬಕ್ಕೆ ಸಾಕಲು ಕೊಡಲಾಗುತ್ತದೆ. ಆ ವೇಳೆಗಾಗಲೇ ಏಳೆಂಟು ವರ್ಷ ವಯಸ್ಸಾಗಿದ್ದ ಆಕೆ ಎಲ್ಲವನ್ನೂ ಅರ್ಥ ಮಾಡಿಕೊಳ್ಳುವಷ್ಟು ಮನಸ್ಥಿತಿ ಹೊಂದಿರುತ್ತಾಳೆ. ಇದುವರೆಗೂ ತಾನು ಬೆಳೆದು ಬಂದ ವಾತಾವರಣಕ್ಕೂ, ಈಗ ದಿಢೀರನೇ ಎದುರಾಗಿರುವ ವಾತಾವರಣಕ್ಕೂ ಬಹಳಷ್ಟು ವ್ಯತ್ಯಾಸಗಳಿದ್ದರೂ ಪ್ರಬುದ್ಧೆಯಾದ ಆಕೆ ಬಹುಬೇಗ ಎಲ್ಲವನ್ನೂ ಕಲಿಯುತ್ತಾಳೆ. ಆದರೆ ತಾನು ಆ ಶ್ರೀಮಂತರ ಮನೆಗೆ ಸೇರಿದವಳಲ್ಲ ಎಂಬ ಅರಿವು ಅವಳಲ್ಲಿ ಇದ್ದೇ ಇರುತ್ತದೆ. ಹಾಗಾಗಿ ಹಳೆಯದನ್ನು ನೆನೆಸಿಕೊಳ್ಳುತ್ತಾ ಹೊಸ ಕುಟುಂಬದಲ್ಲಿಯೂ ಹೊಂದಿಕೊಳ್ಳದೇ, ಅಪರೂಪಕ್ಕೆ ತವರಿಗೆ ಬಂದಾಗ ಇಲ್ಲಿಗೂ ಹೊಂದಿಕೊಳ್ಳಲಾಗದೇ ಪರದಾಡುತ್ತಾಳೆ. ಶ್ರೀಮಂತರ ಕುಟುಂಬಕ್ಕೆ ಬಂದಾಗ ಅಪ್ಪ-ಅಮ್ಮ-ಜೊತೆಯಲ್ಲಿ ಹುಟ್ಟಿದವರನ್ನು ನೆನೆದು ದುಃಖಿಸಿದರೆ, ತವರಿಗೆ ಹೋದಾಗ ತನ...

Parda & Polygami (Kannada)

Image
  ಪುಸ್ತಕ ವಿಮರ್ಶೆ: "ಪರ್ದಾ ಮತ್ತು ಪಾಲಿಗಮಿ" ಮೂಲ‌ ಲೇಖಕರು: ಇಕ್ಬಾಲುನ್ನೀಸಾ ಹುಸೇನ್ ಅನುವಾದಕರು: ದಾದಾಪೀರ್ ಜೈಮನ್ ಈ ಪುಸ್ತಕ ಓದಲು ಮುಖ್ಯವಾದ ಕಾರಣವೆಂದರೆ ಇದರ ಮುನ್ನುಡಿ ಬರೆದುಕೊಟ್ಟಿರುವ ಡಾ. ಸಿ.ಎನ್.ರಾಮಚಂದ್ರನ್ ಅವರ ಮಾತುಗಳು. ಅವರ ಮಾತುಗಳು ಈ ಪುಸ್ತಕವನ್ನು ಓದಲೇಬೇಕೆಂದು ಪ್ರೇರೇಪಿಸುತ್ತವೆ. ನಾನು ಮೂಲ ಇಂಗ್ಲೀಷ್ ಕಾದಂಬರಿ ಓದಿಲ್ಲ. ಹಾಗಾಗಿ ಅನುವಾದವೆಂದರೆ, ಅದರಲ್ಲಿಯೂ ಸ್ವಾತಂತ್ರ್ಯ ಪೂರ್ವದ ಕಾದಂಬರಿ ಬಹುಶಃ ಡಾಕ್ಯುಮೆಂಟರಿ ಥರ ನೀರಸವಾಗಿರುತ್ತದೆ ಎಂದುಕೊಂಡಿದ್ದೆ. ಆದರೆ ಅನುವಾದಕರು ಎಷ್ಟು ಲವಲವಿಕೆಯಿಂದ ಅನುವಾದ ಮಾಡಿದ್ದಾರೆಂದರೆ ಓದುತ್ತಾ ಹೋದಂತೆ ನಮಗೆ ಇದು ಇಂಗ್ಲೀಷಿನ ಅನುವಾದ ಅಂತ ಮರೆತೇ ಹೋಗುತ್ತದೆ. ಅನುವಾದರು ಬಳಸುವ ಕನ್ನಡದ ಸಂಭಾಷಣೆ, ಸಂದರ್ಭಕ್ಕೆ ತಕ್ಕ ಹಾಸ್ಯ, ಆಗಾಗ ಬಳಸುವ ಉರ್ದು ಪದಗಳು ನಮಗೆ ಕಾದಂಬರಿಯನ್ನು ಮತ್ತಷ್ಟು ಆತ್ಮೀಯವಾಗಿಸುತ್ತದೆ. ಇಡೀ ಕಾದಂಬರಿಯಲ್ಲಿ ಪಾತ್ರಗಳ ನಡುವೆ ನಡೆಯುವ ಸಂಭಾಷಣೆಯೇ ನನಗೆ ಬಹಳ ಇಷ್ಟವಾದುದು. ಅನುವಾದಕರೇ ಹೇಳುವಂತೆ "ಅನುವಾದ ಕೇವಲ ಭಾಷಾಂತರ ಕ್ರಿಯೆಯಲ್ಲ. ಅನುವಾದದಲ್ಲೂ ಮೂಲದ ಒಂದಿಷ್ಟು ಸೋರಿಹೋಗಿರುತ್ತದೆ. ಹಾಗೆಯೇ ಅದರಲ್ಲಿ ಮತ್ತೇನೋ ಹೊಸತು ದಕ್ಕಿಬಿಟ್ಟಿರುತ್ತದೆ". ಹೌದು... ಕೆಲವು ಸಂಭಾಷಣೆಗಳು ನಮ್ಮಲ್ಲಿ ಮಾತ್ರ ನಡೆಯುವಂಥವು. ಅದನ್ನೆಲ್ಲಾ ಗುರುತಿಟ್ಟುಕೊಂಡು ಎಲ್ಲಿ ಸೇರಿಸಬೇಕೋ ಅಲ್ಲಿ ಸೇರಿಸಿ ಸಮಯಪ್ರಜ್ಞೆ ತೋರಿ...