Posts

ಹುಣ್ಸ್ ಮಕ್ಕಿ ಹುಳ

Image
  ಈ ಪುಸ್ತಕದ ಬಗ್ಗೆ ಮೊದಲ ಬಾರಿ ತಿಳಿದಾಗ ನನ್ನನ್ನು ಕಾಡಿದ ಸಂಗತಿ ಎಂದರೆ 'ಈ ಪುಸ್ತಕ ಯಾವ ಪ್ರಕಾರಕ್ಕೆ ಸೇರುತ್ತದೆ?' ಎನ್ನುವುದು. ಕಥೆಯಾ(ಗಳಾ), ಕಾದಂಬರಿಯಾ, ಲೇಖನಗಳ ಸಂಗ್ರಹವಾ ಅಥವಾ ಆತ್ಮಕಥೆಯಾ ಅಂತ ಅರ್ಥವಾಗದೇ ಪುಸ್ತಕ ಬಿಡುಗಡೆಗಾಗಿ ಕಾದಿದ್ದೆ. ಇದರ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿ ಬಂದರೂ ಈ ಪುಸ್ತಕ ಯಾವ ಪ್ರಕಾರಕ್ಕೆ ಸೇರುತ್ತದೆ ಅಂತ ಅವರೂ ಹೇಳಲಿಲ್ಲ. ಅಂತೂ ಇಂತೂ ಪುಸ್ತಕ ಕೈ ಸೇರಿದಾಗ ಓದುವ ಮುನ್ನ ಅಷ್ಟೂ ಪುಟಗಳನ್ನು ತಿರುಗಿಸಿ ನೋಡಿದೆ. ಆಗ ಇದು ಯಾವ ಪ್ರಕಾರದ ಪುಸ್ತಕ ಅಂತ ಗೊತ್ತಾಯ್ತು. ಹಾಗಾದರೆ "ಏನಿ್ದೆ ಇದರಲ್ಲಿ?" ಎನ್ನಬೇಡಿ. "ಏನಿಲ್ಲ?" ಅಂತ ಕೇಳಿ. ಎಲ್ಲವೂ ಇದೆ... ಎಲ್ಲವೂ! ಒಬ್ಬ ಕನ್ನಡ ಮಾಧ್ಯಮದಲ್ಲಿ ಓದಿದ ಹೆಣ್ಮಗಳು ಬೆಂಗಳೂರಿನಂತಹಾ ಮಹಾನಗರಿಯಲ್ಲಿ ಕೆಲಸ ಹುಡುಕುವ ಕಷ್ಟದ ಬಗ್ಗೆ ಇದರಲ್ಲಿ ಬರೆಯಲಾಗಿದೆ. ಅದರಲ್ಲೇನು ಮಹಾ ಅಂತೀರಾ? ಹೌದು. ನಮಗೆಲ್ಲರಿಗೂ ಸಹ ಕೆಲಸ ಹುಡುಕುವ ಕಷ್ಟ ಎದುರಾಗಿದೆ, ನಾವೂ ಸಹ ಇಂಗ್ಲೀಷ್ ಬರದೇ ಪರದಾಡಿದ್ದೀವಿ. ಹೆಚ್ಚುಗಾರಿಕೆ ಏನೂ ಇಲ್ಲ. ಆದರೆ ಲೇಖಕಿಯ ಸಂಕಷ್ಟ ಬೇರೆ ಬಗೆಯದು. ಚಿಕ್ಕ ವಯಸ್ಸಿನಿಂದಾದ ಅಗ್ನಿಯ ಅವಘಡದಿಂದ ಮುಖ ಸುಟ್ಟು ಹೋಗಿರುವುದರಿಂದ ಕೆಲಸ ಕೇಳಲು ಹೋಗುವುದು ಎಂತಹಾ ಹಿಂಸೆ ಎಂಬ ಬಗ್ಗೆ ಯಾರಿಗಾದರೂ ಊಹೆ ಇದೆಯೇ...?? ಮುಖ ನೋಡಿ ಮಣೆ ಹಾಕುವ ಜನರೇ ತುಂಬಿರುವಾಗ ಪ್ರೀತಿ ತುಂಬಿದ ಹೃದಯ ಗಮನಿಸುವಷ್ಟು ತಾಳ್ಮೆ ಯಾರಿಗಾದರೂ ...

ಮೃತ್ಯುಂಜಯ by ನಿರಂಜನ

Image
   ಲೇಖಕರು : "ನಿರಂಜನ"    ಸಾಹಿತ್ಯ ಪ್ರಕಾರ: ಕಾದಂಬರಿ (IBH  ಪ್ರಕಾಶನ) ನಮ್ಮ ದಿನನಿತ್ಯದ ಜೀವನದಲ್ಲಿ ಒಬ್ಬರಿಗೆ ಅನ್ಯಾಯವಾದಾಗ ಯಾರೂ ಪ್ರತಿಭಟಿಸುವುದೂ ಇಲ್ಲ ,  ಆ ಅನ್ಯಾಯವನ್ನು ಪ್ರಶ್ನಿಸುವುದೂ ಇಲ್ಲ. ಏಕೆಂದರೆ   ' ದೊಡ್ಡವರನ್ನು ಪ್ರಶ್ನಿಸಬಾರದು '  ಎಂಬ ಮನೋಭಾವವನ್ನು ಚಿಕ್ಕಂದಿನಿಂದಲೇ ನಮ್ಮಲ್ಲಿ ತುಂಬಲಾಗಿರುತ್ತದೆ. ಹಾಗಾಗಿ ನಾವು ಚಿಕ್ಕವರಿದ್ದಾಗ ನಮ್ಮ ಹಿರಿಯರ ಮಾತು ಪಾಲಿಸುತ್ತೇವೆ ,  ದೊಡ್ಡವರಾದಾಗ ದೇಶದ ದೊರೆಗಳ ಮಾತನ್ನು ಪಾಲಿಸುತ್ತೇವೆ.   ನಾಲ್ಕು ಜನರ ಕೈಲಿ   ' ದೊಡ್ಡವರು '  ಎನಿಸಿಕೊಳ್ಳಲು ಅರ್ಹತೆ ಬೇಕು. ಆದರೆ ಈ ಸಮಾಜದಲ್ಲಿ ದುಡ್ಡಿದ್ದವನೇ ದೊಡ್ಡಪ್ಪನಾಗಿದ್ದಾನೆ. ಹಣ ಮತ್ತು ಅಧಿಕಾರ ಇರುವವನ ಮಾತನ್ನು ಎಲ್ಲರೂ ಕೇಳುತ್ತಾರೆ. ಅವನ ಜೊತೆ ಭಯ-ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಅದೇ ಹಣವಿಲ್ಲದವನ ಬಳಿ ಕರುಣೆಯಿಲ್ಲದೇ ವರ್ತಿಸುತ್ತಾರೆ.   ಇಂತಹಾ ಹಣದ ಮದದಿಂದ ಮೆರೆದ ಅಧಿಕಾರಶಾಹಿಗಳ ಕಥೆ ಇದು. ಅವರಿಗೆ ಹಣವೂ ಬೇಕು ,  ಅಧಿಕಾರವೂ ಬೇಕು ,  ಜೊತೆಗೆ ಪ್ರಜೆಗಳು ತಮ್ಮಾಜ್ಞೆಯಂತೆ ನಡೆಯಲೂ ಬೇಕು. ಅದಕ್ಕಾಗಿ ಅವರು ಭಕ್ತಿಮಾರ್ಗವನ್ನು ಆರಿಸಿಕೊಳ್ಳುತ್ತಾರೆ. ಜನರಲ್ಲಿ ಧಾರ್ಮಿಕ ಭಯ ತುಂಬಿ ಅವರನ್ನು ಅಂಧಕಾರದಲ್ಲಿಟ್ಟು ತಾವು ಮಜಾ ಮಾಡುತ್ತಿರುತ್ತಾರೆ‌. ಇಂತಹಾ ದಮನಿತರ ನಡುವಿನಿಂದ ಒಬ್ಬ ನಾಯಕ ಉದಿಸಿ ಬರುತ್ತಾನೆ. ಆ...

ಮಳೆಯಲ್ಲಿ ನೆನೆದ ಕಥೆಗಳು

Image
  (ವಿವಿಧ ಲೇಖಕರ ಕತೆಗಳ ಗುಚ್ಚ) ಕಥಾಗುಚ್ಛದ ಹೆಸರು 'ಮಳೆಯಲ್ಲಿ ನೆನೆದ ಕಥೆಗಳು'. ಅಂದರೆ ಮಳೆಯಲ್ಲಿ ನೆಂದಾಗ ನಮಗೆ ಆಹ್ಲಾದವಾಗುವುದಿಲ್ಲವೇ... ಈ ಕಥೆಗಳನ್ನು ಓದಿದಾಗ ನಮಗೆ ಅದೇ ರೀತಿ ಖುಷಿಯಾಗುತ್ತದೆ. ಏಕೆಂದರೆ ಇಲ್ಲಿನ ಕಥೆಗಳಲ್ಲಿ ಹೊಸತನವಿದೆ, ಲವಲವಿಕೆ ಇದೆ. ಕತೆಗಾರರು ಯಾವ ಮುಲಾಜಿಗೂ ಕಟ್ಟುಬೀಳದೇ ತಮಗನ್ನಿದಂತೆ ಸ್ವತಂತ್ರವಾಗಿ ಬರೆದಿದ್ದಾರೆ. ಈ ಹೊಸತನವೇ ನನಗೆ ಮಳೆಯಲ್ಲಿ ನೆಂದಷ್ಟು ಖುಷಿ ಕೊಟ್ಟಿದ್ದು.  ಅದಕ್ಕಿಂತಲೂ ಖುಷಿ ತಂದವರು ಈ ಕಥೆಗಳನ್ನು ಆಯ್ಕೆ ಮಾಡಿರುವ ಸಂಪಾದಕರು. ಇಂತಹಾ ನವ್ಯ ರೀತಿಯ ಕಥೆಗಳನ್ನು ಗುರುತಿಸಿ, ಆಯ್ಕೆ ಮಾಡಿ, ನಮ್ಮವರೆಗೂ ತಲುಪಿಸಿದ ಅವರಿಗೆ ನಿಜಕ್ಕೂ ನಾನು ಕೃತಜ್ಞೆ. ಬಹಳ ಹೊಸತನದಿಂದ ಕೂಡಿರುವ ಈ ಕತೆಗಳಿಗೆ ಅವರು ಮನ್ನಣೆ ಕೊಟ್ಟಿರುವುದೇ ಖುಷಿ ತರುತ್ತದೆ.  ಕಥಾಗುಚ್ಚ ತೆರೆದುಕೊಂಡ ನಂತರ ಮೊದಲು ಸಿಗುವ ಕಥೆ " ಪರಿಕಲಿತ ". ರಂಜನಿ ಕೀರ್ತಿ ಅವರ ಈ ಕತೆ ನಮ್ಮನ್ನು ಈ ಕಾಥಾಲೋಕಕ್ಕೆ ಎಳೆದುಕೊಳ್ಳಲು ಸಶಕ್ತವಾಗಿದೆ. ಮೊದಲ ಕತೆ ಹುಟ್ಟಿಸುವ ಭರವಸೆಯೇ, ಇಡೀ ಕಥೆಸಂಕಲನ ಓದಲು ಪ್ರೇರೇಪಿಸುತ್ತದೆ. ನಾವೆಲ್ಲಾ ಸಾಮಾನ್ಯದಲ್ಲಿ ಮತ್ತೊಬ್ಬರ ಜೀವನದಲ್ಲಿ ಏನು ಯೋಚಿಸುತ್ತೇವೆಯೋ, ಹಾಗೆ ನಮ್ಮ ದೃಷ್ಟಿಯಿಂದಲೇ ಕಥೆ ಮುನ್ನಡೆಸುತ್ತಾ, ಕೊನೆಗೆ ಕೊಡುವ ಷಾಕ್ ಇದೆಯಲ್ಲ..... 440 ವೋಲ್ಟಿಗಿಂತಲೂ ಹೆಚ್ಚು.  ನಂತರದ ಕಥೆ ' ಮಾಂಕಾಳಿ '. ವಾಣಿ ಸುರೇಶ್ ಅವರ ಈ ಕತೆ ತಾಯಿಯರ ಜೀವನ...